+918310000414
contact@kannadabookpalace.com
+918310000414
contact@kannadabookpalace.com
₹100.00
Book Details |
---|
Author : Sethuram |
ASIN : B0752KPC6J |
Publisher : S N Sethuram |
Language : Kannada |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಪ್ರಸಿದ್ಧ ನಟ-ನಿರ್ದೇಶಕ-ನಾಟಕಕಾರರಾದ ‘ಮಂಥನ’ ಸೇತುರಾಮ್ ಅವರ ಪ್ರಥಮ ಕಥಾಸಂಕಲನ ‘ನಾವಲ್ಲ’. ಈ ಸಂಕಲನದಲ್ಲಿರುವ ಆರೂ ಕಥೆಗಳು ಕೌಟುಂಬಿಕ- ಧಾರ್ಮಿಕ-ರಾಜಕೀಯ ವ್ಯವಸ್ಥೆಗಳನ್ನು ವಾಸ್ತವಿಕ ನೆಲೆಯಲ್ಲಿ ನಿಶಿತವಾಗಿ ವಿಶ್ಲೇಷಿಸುತ್ತವೆ. ಆ ವಿಶ್ಲೇಷಣೆಯ ಮೂಲಕವೇ ವ್ಯವಸ್ಥೆಗಳ ಆಳದಲ್ಲಿರುವ ಅಸಮಾನ ಸಂಬಂಧಗಳು, ಕ್ರೌರ್ಯ, ಭೀತಿ, ಅಸಹಾಯಕತೆ ಇತ್ಯಾದಿಗಳನ್ನು ಬಿಚ್ಚಿ ತೋರಿಸುತ್ತವೆ: ಹಾಗೆ ತೋರಿಸುತ್ತಲೇ ಅವುಗಳನ್ನು ಮೀರುವ ಪ್ರತಿರೋಧದ ಮಾರ್ಗಗಳನ್ನೂ ಶೋಧಿಸುತ್ತವೆ. ಅಸಮಾನ ಅಧಿಕಾರವನ್ನಾಧರಿಸಿದ ಕೌಟುಂಬಿಕ ವ್ಯವಸ್ಥೆಯಲ್ಲಿ ‘ಗಂಡನ ತಪ್ಪೇ ಇದ್ದರೂ ಮಗುವನ್ನು ಹೆರಲಾಗದವಳು ಹೆಂಡತಿಯೇ ಅಲ್ಲ: (‘ಮೌನಿ’)’: ಗಂಡನು ಸಲಿಂಗಕಾಮಿಯಾಗಿದ್ದರೂ ಅವನನ್ನು ಅನುಸರಿಸಿಕೊಂಡು ಹೋಗುವುದು. ಅವನು ಭ್ರಷ್ಠನಾದರೂ ಅವನನ್ನು ಕಾಪಾಡುವುದು ಹೆಂಡತಿಯಾದವಳ ಕರ್ತವ್ಯ (‘ಕಾತ್ಯಾಯಿನಿ’): ಮಕ್ಕಳ ನೆಲೆಯಲ್ಲಿಯೂ ಅಪ್ಪನು ಹೇಗಿದ್ದರೂ ಅವನು ಆದರ್ಶವಾಗುತ್ತಾನೆಯೇ ಹೊರತು ಹೆತ್ತು ಹೊತ್ತ ಅಮ್ಮನಲ್ಲ (‘ಸ್ಮಾರಕ’): ಇದೇ ನೆಲೆಯಲ್ಲಿ. ಧಾರ್ಮಿಕ ವ್ಯವಸ್ಥೆಯಲ್ಲಿ. ‘ಮಠ ಇದೆ. ಅದು ಸತ್ಯ: ಆದರೆ ಧರ್ಮ ಎಲ್ಲದೆ?’ ಎಂದು ಸದಾ ಪ್ರಶ್ನಿಸಿಕೊಳ್ಳುವ. ತಾನು ಕೇವಲ ‘ಯಾರದ್ದೋ ಹಣ, ಆಸ್ತಿ ನಿದ್ದೆಗೆಟ್ಟು ಕಾಯುವ ನಿಯತ್ತಿನ ನಾಯಿ’ ಎಂಬ ಕ್ರೂರ ಸತ್ಯವನ್ನು ಅರಿಯುವ ಪ್ರಾಮಾಣಿಕ ಮಠಾಧಿಪತಿ ತಾನೇ ನೇಣು ಹಾಕಿಕೊಂಡು ಸಾಯುತ್ತಾನೆ (‘ಮೋಕ್ಷ’): ಇತ್ಯಾದಿ.
ಸೇತುರಾಂ ಬರೆದು ನಿರ್ದೇಶಿಸಿರುವ ನಾಟಕ- ಧಾರಾವಾಹಿಗಳಲ್ಲಾಗಲಿ ಈ ಸಂಕಲನದ ಕಥೆಗಳಲ್ಲಾಗಲಿ. ಅವರ ವೈಶಿಷ್ಟ್ಯವೆಂದರೆ ಸಂಭಾಷಣೆ-ಅತ್ಯಂತ ಚುಟುಕಾದ ಹಾಗೂ ಮೊನಚಾದ ವಾಕ್ಯಗಳಿಂದ ಕೂಡಿದ ಸಂಭಾಷಣೆ. ಈ ಬಗೆಯ ಸಂಭಾಷಣೆಯ ಮೂಲಕವೇ ಸೇತುರಾಂ ಅವರು ಪ್ರಸ್ತುತ ಜ್ವಲಂತ ಸಮಸ್ಯೆಗಳನ್ನಾಧರಿಸಿದ ಕಥನಗಳನ್ನು ಕಟ್ಟಿಕೊಡುತ್ತಾರೆ. ಪಾತ್ರಗಳ ವರ್ತನೆಯನ್ನು ದಾಖಲಿಸುತ್ತಾರೆ. ಅವರ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತಾರೆ.
ಈ ಎಲ್ಲಾ ಕಥೆಗಳನ್ನೂ ಓದಿದಮೇಲೆ ನಮಗೆ ಸಹಜವಾಗಿ ಏಳುವ ಪ್ರಶ್ನೆಯೆಂದರೆ, ಸೇತುರಾಂ ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಏಕೆ ಇಷ್ಟು ತಡಮಾಡಿದರು?
-ಸಿ. ಎನ್. ರಾಮಚಂದ್ರನ್
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.