+918310000414
contact@kannadabookpalace.com
+918310000414
contact@kannadabookpalace.com
₹700.00 Original price was: ₹700.00.₹669.00Current price is: ₹669.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಈ ಕೃತಿಯಲ್ಲಿ ಸರ್ವಕಾಲೀನ ಮೌಲ್ಯಚಿತ್ರಣ ವಿದ್ದಂತೆ ಒಂದು ವಿಶಿಷ್ಟ ಯುಗದ ಆವರಣವೂ ರೂಪವೆತ್ತು ಬಂದಿದೆ. ಅಲ್ಲದೆ ಸಮಕಾಲೀನ ಜೀವನಕ್ಕೆ ಇಲ್ಲಿಯ ಚಿತ್ರಣ ಪ್ರತಿಸ್ಪಂದನ ಇಲ್ಲದೆ ಇಲ್ಲ. ವೈದಿಕ ಪುನರುಜ್ಜಿವನದ ಕಾಲಕ್ಕೂ ನಾವು ಹಾಯ್ದು ಬಂದ ಪುನರುಜ್ಜಿವನದ ಯುಗಕ್ಕೂ ಅನೇಕ ಸಾಮ್ಯಗಳಿವೆ. ತ್ರಿಶಂಕುಪ್ರಜ್ಞೆಯ ಚಿತ್ರಣ ವಂತೂ ಸರಿಯೇ ಸರಿ. ದಸ್ಯು ಖಂಡದ ರಾಜ್ಯ ಗಳನ್ನು ಕುರಿತ ವಿಡಂಬನೆಯಲ್ಲಿ ಇಂದಿನ ನಾಗರಿಕ ಜೀವನದ ಮೌಲೀಕರಣವೂ ಇದೆ. ದಾಶರಾಜ್ಞ ಯುದ್ಧದ ವಿಶ್ವಾಮಿತ್ರ ಶಸ್ತ್ರಾಸ್ತ್ರಗಳು ಇಂದಿನ ಶಸ್ತ್ರ ಪ್ರಪಂಚವನ್ನು ಹೋಲುತ್ತವೆ. ಕಾವ್ಯದಲ್ಲಿಯ ವೈದಿಕ ಉಪಮೆಗಳು ಅಂದಿನ ಜೀವನವನ್ನು ನೆನಪಿಗೆ ತರುವಂತೆ, ಅನೇಕಾನೇಕ ಮಹೋಪಮೆ ಗಳ ದ್ವಾರಾ ಆಧುನಿಕ ಪ್ರಪಂಚದ ನಾಗರಿಕತೆ ಕಣ್ಣೆದುರು ಬರುತ್ತದೆ.
ಇಂದಿನ ಕನ್ನಡವೇ ಇಲ್ಲಿಯ ಶೈಲಿಗೆ ತಳಹದಿ ಯಾಗಿದೆ. ಎಲ್ಲ ದಿಕ್ಕುಗಳಿಂದ ಅದರ ಶಬ್ದ ಪ್ರಪಂಚ ತನ್ನ ಸಂಪತ್ತನ್ನು ಪಡೆದುಕೊಳ್ಳುತ್ತದೆ.
ಇನ್ನೂ ಉಳಿದ ಅನೇಕ ಮಾತುಗಳು ಸಂದರ್ಭಾನುಸಾರ ಪುಸ್ತಕದ ಕೊನೆಗೆ ಮುದ್ರಿಸಿದ ಟಿಪ್ಪಣಿಗಳಲ್ಲಿ ಬಂದು ಕೃತಿಯ ವಿವಿಧ ಲಕ್ಷಣ-ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಕ್ರಿ.ಪೂ. 2000ದ ಹಿಂದು ಮುಂದೆ ಇದ್ದ ಸಪ್ತ ಸಿಂಧೂ ದೇಶದ ಭೌಗೋಲಿಕ ನಕಾಶವನ್ನೂ ಟಿಪ್ಪಣಿ ಗಳೊಡನೆ ಕೊಡಲಾಗಿದೆ. ಅದರ ಮೇಲಿಂದ ವಿಶ್ವರಥನು ಯುವರಾಜನಿದ್ದಾಗ ಕೈಕೊಂಡ ಸಪ್ತ ಸಿಂಧೂದೇಶದ ಪ್ರವಾಸದ ಸ್ಕೂಲ ಕಲ್ಪನೆಯೂ ಬರಬಹುದು. ಈ ಕಾವ್ಯದಲ್ಲಿ ಚಿತ್ರಿತವಾದ ಜೀವನದ ಐತಿಹಾಸಿಕ (ಒಂದು ಸಂಕುಚಿತ ಅರ್ಥ ದಲ್ಲಿ ಪೌರಾಣಿಕ), ಭೌಗೋಲಿಕ ಹಾಗೂ ಸಾಮಾಜಿಕ ಹಿನ್ನೆಲೆಗಿದ್ದ ಆಧಾರಗಳನ್ನು ಸೂಚಿಸ ಲಿಕ್ಕೆಂದು ಒಂದು ಗ್ರಂಥಸೂಚಿಯನ್ನೂ ಇಲ್ಲಿ ಕೊಡಲಾಗಿದೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.