+918310000414
contact@kannadabookpalace.com
+918310000414
contact@kannadabookpalace.com
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ನಮಗೆ, ನಮ್ಮ ಸಾಮಾಜಿಕ ಕಲ್ಪನೆಗಳಲ್ಲಿರುವ ದೋಷ, ಅದರಿಂದ ಹಲವರಿಗಾಗಬಹುದಾದ ಅನ್ಯಾಯ ತಿಳಿಯುವುದಿಲ್ಲ. ನಮ್ಮ ಅಸ್ಪೃಶ್ಯತಾ ಪದ್ದತಿ, ದಾಂಪತ್ಯ ನೀತಿ, ಜಾತಿಭೇದ ಮತ್ತು ಅಂತಹ ಇತರ ಅನೇಕ ಕಲ್ಪನೆಗಳು ಈ ರೂಢಿಗಳನ್ನು ಸಮರ್ಥಿಸುತ್ತವೆ. ಅದರಿಂದಾಗಿ, ಅವುಗಳ ಕುಂದುಕೊರತೆಗಳನ್ನು ನುಂಗಿಕೊಂಡು ಜನರು ಮೂಕರಾಗಿ ಬಾಳುವಂತೆ ಮಾಡುತ್ತವೆ.. ಇಲ್ಲಿನ ಮೈಲಿಗಲ್ಲುಗಳು ನಮ್ಮ ನಾಡಿನ ಚರಿತ್ರೆಯನ್ನೋ, ಸಂಸ್ಕೃತಿಯನ್ನೋ, ಧಾರ್ಮಿಕ ಕಲ್ಪನೆಗಳ ವಿಕಾಸವನ್ನೋ ಗುರುತಿಸಿ *
ತೋರಿಸಬಲ್ಲ ಸಂಕೇತಗಳು. ಅಂಥ ಮೈಲಿಗಲ್ಲುಗಳು ಹಾಳು ಛತ್ರಗಳು, ಗುಡಿ ಇಲ್ಲದ ವಿಗ್ರಹಗಳು, ಗಡಿ ಕಲ್ಲುಗಳು, ಪುರಾತನರು ನಟ್ಟ ವಟವೃಕ್ಷಗಳು ಇಂಥವು ತಮ್ಮ ಆತ್ಮಕಥೆಯನ್ನು ಹೇಳುವುದಿದ್ದರೆ, ತಾವು ಸ್ಥಾಪನೆಗೊಂಡ ಕಾಲದಿಂದಲೂ ನಮ್ಮ ಕಣ್ಣಿಗೆ ಬೀಳುವ ಇಂದಿನ ತನಕವೂ ಎಂಥ ಸಂಕಷ್ಟಗಳನ್ನು ಅನುಭವಿಸಿದುವು, ಎಂಥೆಲ್ಲ ಜನರಿಂದ ಏನೇನು ಪಾಡನ್ನು ಪಟ್ಟುವು – ಎಂಬುದನ್ನು – ನನ್ನ ಪ್ರಶ್ನೆಗಳಿಗೆ ಉತ್ತರವಾಗಿ ಅವು ಹೇಳುವಂತೆ ಬರೆದೆ. ಹೀಗೆ ಕಲ್ಲುಗಳನ್ನು ಮಾತಾಡಿಸಿ ಪಾಷಾಣ ಪಂಡಿತನೆನಿಸಿಕೊಂಡೆ….
ಡಾ.ಕೆ. ಶಿವರಾಮ ಕಾರಂತ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.