ಕರ್ನಾಟಕದ ಅಗ್ನಿವಂಶ ಕ್ಷತ್ರಿಯರು
₹380.00
ದಕ್ಷಿಣ ಭಾರತದ ರಾಜಪುತ್ರರು
Author : ಮಧುಸೂಧನ್ ಕೆ.ಆರ್
Publishers Name : ಕದಂಬ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಕರ್ನಾಟಕ ಅಗ್ನಿವಂಶ ಕ್ಷತ್ರಿಯರು ಎಂಬ ಕೃತಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಂಜಿಗನಹಳ್ಳಿಯ ಶ್ರೀ ಮಧುಸೂಧನ್ ಕೆ ಆರ್ ಅವರು ಬರೆದಿದ್ದು ಅಗ್ನಿವಂಶ ಕ್ಷತ್ರಿಯರ ಬಗ್ಗೆ ನಾನಾ ಮೂಲಗಳಿಂದ ವಿವರಗಳನ್ನು ಸಂಗ್ರಹಿಸಿದ್ದಾರೆ. ಭಾರತದಾದ್ಯಂತ ಅಗ್ನಿಯಿಂದ ನಿಷ್ಪನ್ನರಾದವರೆಂದು ಹೇಳಿಕೊಳ್ಳುವ ಅನೇಕ ಗುಂಪುಗಳಿವೆ. ಭಾರತದಲ್ಲಿ ಅಳ್ವಿಕೆ ನಡೆಸಿದ ಹಿಂದೂ ರಾಜರನ್ನು ಸಾಮಾನ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು “ಚಂದ್ರವಂಶ’ ಇನ್ನೊಂದು ಸೂರ್ಯವಂಶ’, ‘ಅಗ್ನಿವಂಶ’ವು ಇವೆರಡರಲ್ಲಿಯೂ ಸೇರಿದೆ. ಚಂದ್ರವಂಶದವರು ಪ್ರಮುಖವಾಗಿ ಯಾದವರು. ಯಾದವ ಮೂಲದಿಂದ ಬಂದವರು. ಕರ್ನಾಟಕ, ಮಹಾರಾಷ್ಟ್ರ, ಗುಜರಾತನ್ನು ಆಳಿದ ಬಹುತೇಕ ಅರಸು ಮನೆತನಗಳಿಗೆ ಮೂಲ ಪುರುಷ ಯದುರಾಯನಾಗಿದ್ದಾನೆ. ಯಾದವರ ಮೂಲ ಪುರುಷನೂ ಯದುವೇ. ಹೊಯ್ಸಳರು, ದೇವಗಿರಿ ಯಾದವರು, ಕಾಕತೀಯ ಅರಸರು, ವಿಜಯನಗರದ ಅರಸರು. ಕೊನೆಗೆ ಮೈಸೂರು ಅರಸರು ತಮ್ಮ ಮೂಲವನ್ನು “ಯಧು ವಿನಿಂದಲೇ ಪ್ರಾರಂಭಿಸಿದ್ದಾರೆ. ಸೂರ್ಯವಂಶ ಅಥವಾ ಇನಾಕುಲ ಅಥವಾ ರವಿಕುಲದ ಮೂಲವನ್ನು ಹೇಳುವ ವಂಶಗಳಿಗೆ ಮೂಲ ಸೂರ್ಯ. ಇವನ ವಂಶದಲ್ಲಿ ಬಂದವನು ದಿಲೀಪ ಕರ್ನಾಟಕದ ಕದಂಬರು, ಆಂಧ್ರದ ಇಕ್ಷಾಕುಗಳು, ತೆಲುಗು ಚೋಳ ಮನೆತನ ಮೊದಲಾದವರು ತಮ್ಮನ್ನು ಸೂರ್ಯ ಅಥವಾ ರವಿಕುಲಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಮಧುಸೂಧನ್ ಅವರು ಇನ್ನೂ ಅನೇಕ ರಾಜವಂಶಗಳನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕ ಜಾತಿಗಳಲ್ಲಿ ಒಂದು ಸಣ್ಣ ಗುಂಪಾದ ಅಗ್ನಿವಂಶ ಕ್ಷತ್ರಿಯರ ಬಗ್ಗೆ ಮಾಹಿತಿ ಕಲೆಹಾಕಿ ಆ ಜಾತಿಯ ಆಚರಣೆಗಳ ಬಗ್ಗೆ ಹೊರ ಪ್ರಪಂಚಕ್ಕೆ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತಿರುವ ಮಧುಸೂಧನ್ ಅವರ ಪ್ರಯತ್ನಕ್ಕೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ.




Reviews
There are no reviews yet.