+918310000414
contact@kannadabookpalace.com
+918310000414
contact@kannadabookpalace.com
₹180.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಈ ಕೃತಿಯಲ್ಲಿ ವರ್ಣಿಸಿದ್ದೆಲ್ಲ ನಮಗೆ ಪರಿಚಿತ ಮರಗಳೇ ಎಂಬಂತೆ ಮೇಲ್ನೋಟಕ್ಕೆ ತೋರುತ್ತದೆ. ಆಲ, ಹಲಸು, ಹುಣಿಸೆ, ನೇರಳೆ, ನುಗ್ಗೆ ಇವೆಲ್ಲ ಎಲ್ಲರಿಗೂ ಗೊತ್ತಿದೆಯೆಂದೇ ನಾವು ಭಾವಿಸುತ್ತೇವೆ. ಆದರೆ ಸಾರ್ವಜನಿಕ ಮುಗ್ಧತೆ ಅದೆಷ್ಟೋ ಬಾರಿ ನಾವೆಣಿಸಿದ್ದಕ್ಕಿಂತ ಜಾಸ್ತಿ ಇರುತ್ತದೆ. ದಿನವೂ ಸಂಪಿಗೆ ಮರದ ನೆರಳಲ್ಲೇ ಗಾಡಿಯನ್ನು ಪಾರ್ಕ್ ಮಾಡುವ ವ್ಯಕ್ತಿಗೆ ಸಂಪಿಗೆ ಮರದ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ತಾನು ಸಂಪಿಗೆಯ ಘಮಘಮ ದಳಗಳ ಮೇಲೆ ಹೆಜ್ಜೆಯಿಡುತ್ತ ಸಾಗಿದರೂ ಯಾವ ಮರದ ಕೆಳಗೆ ಗಾಡಿಯನ್ನು ನಿಲ್ಲಿಸಿದ್ದೇನೆ ಎಂಬುದು ಗೊತ್ತಿರುವುದಿಲ್ಲ. ಮನದ ಒಳಗಣ್ಣು ತೆರೆದರೆ ಮಾತ್ರ ಹೊರಗಿನ ಬಿಂಬ ಒಳಕ್ಕೆ ಪ್ರವೇಶ ಮಾಡುತ್ತದೆ. ಇಲ್ಲವಾದಲ್ಲಿ ಎದುರಿಗೇ ದಿನವೂ ಕಾಣುವ ವೃಕ್ಷವೂ ಅಗೋಚರವೇ ಆಗಿರುತ್ತದೆ.
ಡಾ. ಪೆಂಡಕೂರರು ಈ ಅರವತ್ತು ಸಸ್ಯಗಳ ಕುರಿತು ನಮ್ಮ ಒಳಗಣ್ಣು ತೆರೆಯುವಂತೆ ಮಾಡಿದ್ದಾರೆ. ದೃಕ್ತದ ಇರವು ನಮ್ಮ ಅರಿವಿಗೆ ಬಂದರೆ ಅದರೊಂದಿಗೆ ಬದುಕುವ ದುಂಬಿ, ಜೇನ್ನೊಣಗಳೂ, ಗೊರವಂಕ- ಕಾಜಾಣಗಳೂ, ಸರೀಸೃಪ-ಬಂದಳಿಕೆಗಳ ಜೀವಜಾಲದ ವಿಸ್ಮಯಕರ ನೇಯ್ದೆಯೂ ನಮ್ಮ ಗಮನಕ್ಕೆ ಬರುತ್ತದೆ ತಾನೆ? ಈ ನಿಸರ್ಗ ನಿರ್ಮಿತ ಕೌದಿ ಅನ್ನಿ, ಕವನ ಅನ್ನಿ, ಸಸ್ಯ ಸ್ವರಮೇಳ ಅನ್ನಿ-ಜೀವವಿಕಾಸದ ಆ ಕಲಾ ಚಮತ್ಕಾರವನ್ನು ಅಕ್ಷರಗಳ ಮೂಲಕ ತೋರಿಸುವ ಉತ್ತಮ ಕೆಲಸ ಇಲ್ಲಿ ಸಾಕಾರವಾಗಿದೆ.
ನಾಗೇಶ ಹೆಗಡೆ, ಬೆಂಗಳೂರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.